ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಮ್):
.

ಇಂಧನ ಸಂರಕ್ಷಣೆ (ಇಸಿ) ಮತ್ತು ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಂ) ಕ್ರಮಗಳನ್ನು ಅಳವಡಿಸಿಕೊಂಡು ಶಕ್ತಿಯನ್ನು ಉಳಿಸುವ, ಶಕ್ತಿಯ ದಕ್ಷ ಬಳಕೆಯ ಜಾಗೃತಿ ಮೂಡಿಸುವ ಕಾರ್ಯ ಯೋಜನೆಗಳನ್ನು ಡಿಎಸ್ಎಮ್ ಸೆಲ್, ಹೆಸ್ಕಾo ಕೈಗೊಳ್ಳುತ್ತಿದೆ.
ವಿದ್ಯುಚ್ಛಕ್ತಿ ಬೇಡಿಕೆಯ ಸಮಯ ಮತ್ತು ಬೇಡಿಕೆಗಳಿಗೆ ಸಂಬಂಧಿಸಿದಂತೆ ತಮ್ಮ ವಿದ್ಯುಚ್ಛಕ್ತಿ ಬಳಕೆ ವಿಧಾನಗಳನ್ನು ಮಾರ್ಪಡಿಸುವ ಮೂಲಕ ಹಾಗೂ ದಕ್ಷ ವಿದ್ಯುತ್ ಉಪಕರಣಗಳನ್ನು ಪರಿಣಾಮಕಾರಿಯಾಗಿ ಬಳಸಲು ಪ್ರೋತ್ಸಾಹಿಸಲು ಹೆಸ್ಕಾಂ ದಿಂದ ಕೈಗೊಂಡ ಕ್ರಮಗಳು:
1. ಹೊಸ ಬೆಳಕು ಯೋಜನೆ: ಹೆಸ್ಕಾಂನಲ್ಲಿ ದಿನಾಂಕ: 04-02-2016 ರಿಂದ ಎಲ್ಇಡಿ ಬಲ್ಬುಗಳ ಉಪಯೋಗದ ಬಗ್ಗೆ ಅರಿವು ಮೂಡಿಸುವ ‘ಹೊಸಬೆಳಕು’ ಯೋಜನೆ ಇ.ಇ.ಎಸ್.ಎಲ್ ವತಿಯಿಂದ ಜಾರಿಯಲ್ಲಿದೆ. ಮೇ 2022 ರವರೆಗೆ ಮಾರಾಟ ಮತ್ತು ಇಂಧನ ಉಳಿತಾಯದ ವಿವರ,
ಕ್ರ.ಸಂ. |
ವಿವರಗಳು |
ಮೇ 2022 ರ ವರೆಗೆ ಮಾರಾಟವಾದ ವಿವರ |
ಮೇ 2022 ರ ವರೆಗೆ ಇಂಧನ ಉಳಿತಾಯದ ವಿವರ (ಮಿ. ಯು)
|
01 |
ಎಲ್ಇಡಿ ಬಲ್ಬ್ ಗಳು |
25,17,808 |
296.44 |
02 |
ಎಲ್ ಇ ಡಿ ಟ್ಯೂಬಲೈಟ್ಗಳು |
32,264 |
3.75 |
03 |
ಇಂಧನ ದಕ್ಷ ಫ್ಯಾನ್ ಗಳು |
6,825 |
0.92 |
ಒಟ್ಟು |
301.11 |
2. ಹೆಸ್ಕಾಂನ ಎಲ್ಲ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ ರೀಂಗ್ ಬ್ಯಾಕ್ ಟೋನ್:
ಹೆಸ್ಕಾಂನ ಎಲ್ಲಾ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ, ಹೆಸ್ಕಾಂನ ಸೇವಾ ಸೌಲಭ್ಯಗಳು, ಹೆಸ್ಕಾಂ 24ಗಂಟೆ ಸಹಾಯವಾಣಿ 1912, ಎಲ್.ಇ.ಡಿ ದೀಪಗಳ ಬಗ್ಗೆ ಒಳಗೊಂಡ ರೀಂಗ್ ಬ್ಯಾಕ್ ಟೋನ್ನ್ನು ದಿನಾಂಕ: 17.04.2017 ರಿಂದ ಅಳವಡಿಸಿ ಅರಿವು ಮೂಡಿಸಲಾಗುತ್ತಿದೆ
3. ಕೆಪ್ಯಾಸಿಟಿ ಬಿಲ್ಡಿಂಗ್ ಪ್ರೊಗ್ರಾಮ್ (Capacity Building Program): ಸಾಮರ್ಥ್ಯ ನಿರ್ವಹಣಾ ಕಾರ್ಯಕ್ರಮ
• ಈ ಕಾರ್ಯಕ್ರಮಕ್ಕೆ ಅಗಸ್ಟ 29 2018 ರಲ್ಲಿ ಬಿ.ಇ.ಇ, ಕೆ.ಆರ್.ಡಿ.ಎಲ್ ಮತ್ತು ಹೆಸ್ಕಾಂ ನಡುವೆ ಒಪ್ಪಂದವಾಗಿರುತ್ತದೆ. ಈ ಕಾರ್ಯಕ್ರಮದಡಿಯಲ್ಲಿ ಬಿಇಇ ನೀಯೋಜಿಸಿದ ಸಿಐಐ ತಂಡವು ಇಂಧನ ದಕ್ಷತೆ ಮತ್ತು ಡಿ.ಎಸ್.ಎಮ್ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಹೆಸ್ಕಾಂ ಅಧಿಕಾರಿಗಳಿಗೆ ನೀಡಲಾಯಿತು.
• ಸಿಐಐ ಅವರು 5 ದಿನಗಳ ಮಾಸ್ಟರ್ ಟ್ರೆನರ್ಗಳ ತರಬೇತಿ ಕಾರ್ಯಕ್ರಮವನ್ನು ದಿನಾಂಕ 15.01.2019 ರಿಂದ 19.01.2019 ರ ವರೆಗೆ ಹುಬ್ಬಳ್ಳಿಯ ನವೀನ ಹೋಟೆಲ್ ನಲ್ಲಿ ನಡೆಸಿದರು, ಈ ತರಬೇತಿಯಲ್ಲಿ 43 ಹೆಸ್ಕಾಂನ ಅಧಿಕಾರಿಗಳು ಭಾಗವಹಿಸಿದ್ದರು.
• 3 ದಿನಗಳ ವೃತ್ತವಾರು ತರಬೇತಿ ಕಾರ್ಯಕ್ರಮವನ್ನು (ಬಾಗಲಕೋಟ ಮತ್ತು ವಿಜಯಪುರ ವೃತ್ತ) ದಿನಾಂಕ 05.12.2019 ರಿಂದ 07.12.2019ರ ವರೆಗೆ ಬಾಗಲಕೋಟನ ಕ್ಲರ್ಕ ಇನ್ನ್ ಹೋಟೆಲ್ನಲ್ಲಿ ನಡೆಸಿದರು, ಈ ತರಬೇತಿಯಲ್ಲಿ 34 ಹೆಸ್ಕಾಂನ ಅಧಿಕಾರಿಗಳು ಭಾಗವಹಿಸಿದ್ದರು.
• 3 ದಿನಗಳ ವೃತ್ತವಾರು ತರಬೇತಿ ಕಾರ್ಯಕ್ರಮವನ್ನು (ಬೆಳಗಾವಿ ಮತ್ತು ಚಿಕ್ಕೋಡಿ ವೃತ್ತ) ದಿನಾಂಕ 09.12.2019 ರಿಂದ 11.12.2019ರ ವರೆಗೆ ಬೆಳಗಾವಿನ ಚಾನ್ಸರಿ ಹೋಟೆಲ್ನಲ್ಲಿ ನಡೆಸಿದರು, ಈ ತರಬೇತಿಯಲ್ಲಿ 36 ಹೆಸ್ಕಾಂನ ಅಧಿಕಾರಿಗಳು ಭಾಗವಹಿಸಿದ್ದರು
• ಕೆಪ್ಯಾಸಿಟಿ ಬಿಲ್ಡಿಂಗ್ ಪ್ರೊಗ್ರಾಮ್ ಸಾಮರ್ಥ್ಯ ನಿರ್ವಹಣಾ ಕಾರ್ಯಕ್ರಮದಡಿಯಲ್ಲಿ ಬರುವ ಚಟುವಟಿಕೆಗಳು ಹೆಸ್ಕಾಂನ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಲೋಡ್ ಅನ್ನು ಗರಿಷ್ಠ ಬೇಡಿಕೆಯಿಂದ ನೇರ ಬೇಡಿಕೆಯ ಅವಧಿಗೆ ವರ್ಗಾಯಿಸುವುದು, ದಿನದ ಸಮಯದ ಆಧಾರದ ಮೇಲೆ ವಿಭಿನ್ನ ದರಗಳನ್ನು ಹೊಂದಲು, ಹಾಗೂ ವೆಚ್ಚ ಪರಿಣಾಮಕಾರಿ ಕಾರ್ಯ್ಯತಂತ್ರಗಳ ಮೂಲಕ ಇಂಧನ ದಕ್ಷತೆಯನ್ನು ಸುಧಾರಿಸಲು ಸೇರಿದಂತೆ ಡಿಎಸ್ಎಂ ಕ್ರಿಯಾ ಯೋಜನೆಯನ್ನು ಕಾರ್ಯ್ಯಗತಗೊಳಿಸಲು ಹೆಸ್ಕಾಂಗೆ ಅನುವು ಮಾಡಿಕೊಡುತ್ತದೆ.
4. ಪತ್ರಿಕಾ ಮಾಧ್ಯಮ: ವಿಶೇಷ ದಿನಗಳಲ್ಲಿ ದಿನ ಪತ್ರಿಕೆಗಳಲ್ಲಿ ವಿದ್ಯುತ್ ಬಳಕೆಯಲ್ಲಿ ಉಳಿತಾಯದ ಕ್ರಮಗಳು, ಎಲ್.ಇ.ಡಿ. ಬಳಕೆಯ ಪ್ರಯೋಜನಗಳು, ಸುರಕ್ಷತೆಯ ಸಲಹೆಗಳು, ಸೌರಶಕ್ತಿ ಉತ್ಪಾದನೆಗಾಗಿ ಜಾಗೃತಿಗಳನ್ನು ಜಾಹೀರಾತು ನೀಡುವುದರ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
5. ರೇಡಿಯೋ ಮಾಧ್ಯಮ: ಇಂಧನ ಉಳಿತಾಯ, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು, ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು ಬಿಲ್ ಪಾವತಿ, ಸುರಕ್ಷತಾ ಕಾರ್ಯ್ಯವಿಧಾನಗಳು ಮತ್ತು ಹೆಸ್ಕಾಂ ಸೇವೆಗಳ ಬಗ್ಗೆ ಜಾಗೃತಿ, ಸೋಲಾರ್ ಮೇಲ್ಛಾವಣಿ ಪಿವಿ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು ಇತ್ಯಾದಿಗಳ ಕುರಿತು ಜಿಂಗಲ್ಸ್ ಮತ್ತು ಕಾರ್ಯ್ಯಕ್ರಮದ ಮೂಲಕ. ಆಲ್ ಇಂಡಿಯಾ ರೇಡಿಯೊದ ಪ್ರೈಮರಿ ಚಾನೆಲ್ನಲ್ಲಿ ಪ್ರಸಾರ (01.12.2017 ರಿಂದ 31.03.2018 ರವರೆಗೆ) (16.07.2019 ರಿಂದ 31.03.2020 ರವರೆಗೆ) ಮತ್ತು (16.07.2020 ರಿಂದ 31.03.2021 ರವರೆಗೆ)
6. ಹೆಸ್ಕಾಂ ಕ್ಯಾಲೆಂಡರ್: ಹೆಸ್ಕಾಂ ಕ್ಯಾಲೆಂಡರ್-2018, 2019, 2020ರ ಮುಖಾಂತರ ವಿದ್ಯುತ್ ಉಪಯುಕ್ತ ಮಾಹಿತಿ, ಹೆಸ್ಕಾಂನ ಯೋಜನೆ, ವಿದ್ಯುತ್ ಉಳಿತಾಯದ ಕ್ರಮಗಳು, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು, ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು, ಸೌರಶಕ್ತಿ ಉತ್ಪಾದನೆಗಾಗಿ ಜಾಗೃತಿ, ಹೆಸ್ಕಾಂ 24 ಗಂಟೆ ಸಹಾಯವಾಣಿ 1912, ಹೆಸ್ಕಾಂ ಸೇವೆಗಳು ಇತ್ಯಾದಿಗಳ ಬಗ್ಗೆ ಪ್ರಚಾರ ಮಾಡಲಾಗಿದೆ.
7. ಶೈಕ್ಷಣಿಕ / ಶಿಕ್ಷಣ ಸಂಸ್ಥೆಗಳಲ್ಲಿ ಜಾಗೃತಿ ಕಾರ್ಯಕ್ರಮ: ವಿದ್ಯಾರ್ಥಿಗಳಲ್ಲಿ ಇಂಧನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವಿದ್ಯಾರ್ಥಿಗಳ ಮೂಲಕ ಜಾಗೃತಿ ಮೂಡಿಸಲು ಶೈಕ್ಷಣಿಕ / ಶಿಕ್ಷಣ ಸಂಸ್ಥೆಗಳೊಂದಿಗೆ ಎನ್ಜಿಒ-ದೇಶಪಾಂಡೆ ಶಿಕ್ಷಣ ಟ್ರಸ್ಟ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
8. ಹೆಸ್ಕಾಂ ಡಿಎಸ್ಎಮ್ / ಎನರ್ಜಿ ದಕ್ಷತೆಯ ಕಾರ್ಯಕ್ರಮಗಳ ಅಡಿಯಲ್ಲಿ ಇತರ ಎಸ್ಕಾಂ ಗಳು ಎಂ.ಎನ್.ಆರ್.ಇ, ಎಸ್ಇಸಿಐ, ಕೆ.ಆರ್.ಡಿ.ಎಲ್ ಮತ್ತು ಇಂಧನ ಇಲಾಖೆಯೊಂದಿಗೆ ಸಂಯೋಜಿಸುತ್ತದೆ.
ಡಿ ಎಸ್ ಎಮ್ ಶಾಖೆಯಿಂದ ವರ್ಷವಾರು ಗ್ರಾಹಕರಲ್ಲಿ ಈ ಕೆಳಕಂಡ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಆಯೋಜಿಸಲಾದ ಕಾರ್ಯಗಳ ವಿವರಗಳು.
• ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು,
• ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದು,
• ಸೋಲಾರ್ ಮೇಲ್ಛಾವಣಿ ಪಿವಿ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು ಮತ್ತು ಹೆಸ್ಕಾಂ ಸೇವೆಗಳ ಬಗ್ಗೆ ಜಾಗೃತಿ,
• ಬೀದಿ ದೀಪಗಳಿಗೆ ಕಡ್ಡಾಯವಾಗಿ ಎಲ್ ಇ ಡಿ ದೀಪ/ದಕ್ಷ ಇಂಧನ ದೀಪಗಳಾದ ಇಂಡಕ್ಷನ್ ಲ್ಯಾಂಪಗಳನ್ನು ಹಾಗೂ ಟೈಮರ್ ಸ್ವಿಚ್ಗಳನ್ನು ಅಳವಡಿಸುವುದು,
• ನೀರಾವರಿ ಪಂಪಸೆಟ್ಗಳಿಗೆ ಕಡ್ಡಾಯವಾಗಿ ಹೆಚ್ಚಿನ ಕಾರ್ಯಕ್ಷಮತೆಯುಳ್ಳ (Energy Efficient) 5 ಸ್ಟಾರ್ ರೇಟೆಡ್ ಪಂಪ್ಗಳನ್ನೇ ಅಳವಡಿಸುವುದು,
• ಇಂಧನ ಉಳಿತಾಯ, ಸುರಕ್ಷತಾ ಕಾರ್ಯವಿಧಾನಗಳು ಡಿಎಸ್ಎಂ ಸಲಹೆಗಳು, ಇಂಧನ ದಕ್ಷತೆಯ ವಿಧಾನಗಳು, ಇತರೆ.
• ಸಹಾಯವಾಣಿ ಸಂಖ್ಯೆ 1912.
ಆರ್ಥಿಕ ವರ್ಷ 2018-19
1. ಎರಡು ದಿನಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ ಉತ್ಸವ – ಮೆಲಂಜೆ : ಈ ಉತ್ಸವವು ದಿನಾಂಕ 5– 6 ಎಪ್ರೀಲ್ 2018 ರಂದು ಎಸ್ ಕೆ ಎಸ್ ವಿ ಎಮ್ ಅಂಗಡಿ ಕಾಲೇಜು ಲಕ್ಷ್ಮೇಶ್ವರ ನಲ್ಲಿ ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು.
2. 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ:
• ದಿನಾಂಕ 04.01.2019 ರಿಂದ 06.01.2019ರ ವರೆಗೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿ ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು.
• ಸಮ್ಮೇಳನದಲ್ಲಿ ‘ವಿದ್ಯುತ್ ಉಳಿತಾಯದ’ ಘೋಷಣಾ ಇರುವ ಟಿ-ಶರ್ಟಗಳನ್ನು ಸ್ವಯಂ ಸೇವಕರಿಗೆ ವಿತರಿಸುವ ಮೂಲಕ ‘ಡಿ.ಎಸ್.ಎಮ್’ ಕಾರ್ಯಕ್ರಮ’ ಮಾಡಲಾಯಿತು
3. ವಿದ್ಯುತ್ ಉಳಿತಾಯ ಸಮರ:
ದೇಶಪಾಂಡೆ ಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ ಮತ್ತು ಹೆಸ್ಕಾಮ್ನ ಜಂಟಿ ಸಹಯೋಗದಡಿಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಇಂಧನ ಸಂರಕ್ಷಣೆ, ಸುರಕ್ಷತೆ ಇತ್ಯಾದಿಗಳ ಬಗ್ಗೆ ಜಾಗೃತಿ / ಶಿಕ್ಷಣ ಕಾರ್ಯ್ಯಕ್ರಮಗಳನ್ನು ಗ್ರಾಮೀಣ, ಅರೆ ನಗರ ಮತ್ತು ನಗರ ಯುವಕರಿಗೆ, ಕೈಗೊಳ್ಳಲಾಯಿತು.
• DSM-Life Skill for students: ಈ ಕಾರ್ಯಕ್ರಮದಲ್ಲಿ 231 ಐಟಿಐ ಕಾಲೇಜಿನಲ್ಲಿ ಜಾಗೃತಿ ಕಾರ್ಯ್ಯಕ್ರಮಗಳನ್ನು ನಡೆಸಲಾಯಿತು.
• ವಿದ್ಯುತ್ ಉಳಿತಾಯ ಸಮರ ರಸ ಪ್ರಶ್ನೆ: ಈ ಕಾರ್ಯಕ್ರಮದಲ್ಲಿ ವಿವಿಧ ಐಟಿಐ ಕಾಲೇಜಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.
ಆರ್ಥಿಕ ವರ್ಷ 2019-20
1. ಎರಡು ದಿನಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ ಉತ್ಸವ – ಮೆಲಂಜೆ : ಈ ಉತ್ಸವವು ದಿನಾಂಕ 26 – 27 ಎಪ್ರೀಲ್ 2019 ರಂದು ಎಸ್ ಕೆ ಎಸ್ ವಿ ಎಮ್ ಅಂಗಡಿ ಕಾಲೇಜು ಲಕ್ಷ್ಮೇಶ್ವರ ನಲ್ಲಿ ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು, ಈ ಕಾರ್ಯಕ್ರಮದಲ್ಲಿ 4000 ವಿಧ್ಯಾರ್ಥಿಗಳು ಭಾಗವಹಿಸಿದರು.
2. ವಿಜಯವಾಣಿ ಪ್ರಾಪರ್ಟಿ ಎಕ್ಸ್ಪೋ 2019 : ಮೇ 03 ರಿಂದ 05 ರ ವರೆಗೆ ಹುಬ್ಬಳ್ಳಿಯ ರಾಯ್ಕರ್ ಮೈದಾನದಲ್ಲಿ ನಡೆಯಿತು. ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು, ಈ ಕಾರ್ಯಕ್ರಮಕ್ಕೆ ಸುಮಾರು 50,000 ಜನ ಭೇಟಿ ಮಾಡಿದ್ದರು.
3. ಮಾಸಿಕ ಬಿಲ್ ಜೊತೆ ಕರಪತ್ರಗಳ ವಿತರಣೆ: 20,00,000 ಕರಪತ್ರಗಳನ್ನು ಜೂನ್ 2019 ರಿಂದ ಮಾಸಿಕ ಬಿಲ್ ಜೊತೆ ಎಲ್ಲಾ ಗ್ರಾಹಕರಿಗೆ ವಿತರಿಸಲಾಯಿತು, ಕರಪತ್ರಗಳಲ್ಲಿ ವಿದ್ಯುತ್ ಬಳಕೆಯಲ್ಲಿ ಉಳಿತಾಯದ ಕ್ರಮಗಳು, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು, ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು, ಸುರಕ್ಷತೆಯ ಸಲಹೆಗಳು, ಸೌರಶಕ್ತಿ ಬಳಸುವುದು, ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
4. ಹೆಸ್ಕಾಂನ ಪ್ರತಿ ಶಾಖೆಯಲ್ಲಿ ಗ್ರಾಹಕ/ ಸಾರ್ವಜನಿಕ ಜಾಗೃತಿ ಸಭೆ: (ಜುಲೈ 2019- ಅಗಸ್ಟ್ 2019) ಹೆಸ್ಕಾಂನ 246 ಶಾಖೆಯ ಸಾರ್ವಜನಿಕ ಸ್ಥಳದಲ್ಲಿ ಕಾರ್ಯ್ಯಕ್ರಮಗಳನ್ನು ನಡೆಸುವುದರ ಮೂಲಕ ಗ್ರಾಹಕ / ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. 23000 ಜನ ಭಾಗವಹಿಸಿದರು.
5. ಹೆಸ್ಕಾಂನ ಪ್ರತಿ ಶಾಖೆಯಲ್ಲಿ ಗ್ರಾಹಕ/ ಸಾರ್ವಜನಿಕ ಜಾಗೃತಿ ಸಭೆ: (ಫೆಬ್ರವರಿ 2020) ಹೆಸ್ಕಾಂನ 201 ಶಾಖೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾರ್ಯ್ಯಕ್ರಮಗಳನ್ನು ನಡೆಸುವುದರ ಮೂಲಕ ಗ್ರಾಹಕ / ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. 15000 ಜನ ಭಾಗವಹಿಸಿದರು.
6. PARSEC 2020: ದಿನಾಂಕ 15.02.2020 ರಿಂದ 16.02.2020 ರ ವರೆಗೆ ಐಐಟಿ ಕ್ಯಾಂಪಸ್, ಧಾರವಾಡದಲ್ಲಿ ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು.
7. Festival of Wrestling : ದಿನಾಂಕ 22.02.2020 ರಿಂದ 25.02.2020 ರ ವರೆಗೆ ಕೆ ಸಿ ಡಿ ಮೈದಾನ, ಧಾರವಾಡದಲ್ಲಿ ಜರುಗಿತು. ಜಾಗೃತಿ ಚಟುವಟಿಕೆಗಳನ್ನು ಸ್ಟಾಲ್ ಮೂಲಕ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಸುಮಾರು 50,000-60,000 ಜನ ಭೇಟಿ ಮಾಡಿದ್ದರು.
ಆರ್ಥಿಕ ವರ್ಷ 2020-21ರ ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಮ್) ಶಾಖೆಯ ಜಾಗೃತಿ ಕಾರ್ಯಕ್ರಮಗಳು:
1. ಹೆಸ್ಕಾಂನ ಎಲ್ಲ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ ರೀಂಗ್ ಬ್ಯಾಕ್ ಟೋನ್: ಹೆಸ್ಕಾಂನ ಎಲ್ಲಾ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ, ಹೆಸ್ಕಾಂನ ಸೇವಾ ಸೌಲಭ್ಯಗಳು, ಬಿಇಇ ಪ್ರಮಾಣೀಕರಿಸಿದ 5-ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು. ಹೆಸ್ಕಾಂ 24ಗಂಟೆ ಸಹಾಯವಾಣಿ 1912, ಎಲ್.ಇ.ಡಿ ದೀಪಗಳ ಪ್ರಯೋಜನೆಗಳ ಬಗ್ಗೆ ಒಳಗೊಂಡ ರೀಂಗ್ ಬ್ಯಾಕ್ ಟೋನ್ನ್ನು ಎಲ್ಲಾ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ ಒದಗಿಸಲಾಗಿದೆ.
2. ಆಲ್ ಇಂಡಿಯಾ ರೇಡಿಯೋ: ಇಂಧನ ಉಳಿತಾಯ, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು, ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು, ಸೋಲಾರ್ ಮೇಲ್ಛಾವಣಿ ಪಿವಿ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು, ರೈತರ ಕೃ ಷಿ ನೀರಾವರಿ ಪಂಪ್ ಸೆಟ್ ಗಳಿಗೆ ಬಿಇಇ ಪ್ರಮಾಣೀಕರಿಸಿದ 4 ಅಥವಾ 5 ಸ್ಟಾರ್ ರೇಟೆಡ್ ಪಂಪ್ ಅಳವಡಿಸುವುದು, ಸೌರಶಕ್ತಿ ಬಳಸುವ ಬಗ್ಗೆ ಜಾಗೃತಿ, ಡಿಎಸ್ಎಂ ಸಲಹೆಗಳು, ಸುರಕ್ಷತೆಯ ಸಲಹೆಗಳು, ಬಿಲ್ ಪಾವತಿ, ಕೃಷಿ ಬಳಕೆಗೆ ಸಲಹೆ, ಸಹಾಯ ವಾಣಿ ಸಂಖ್ಯೆ 1912, ಇತ್ಯಾದಿಗಳ ಕುರಿತು ಜಿಂಗಲ್ಸ್ ಪ್ರೈಮರಿ ಚಾನೆಲ್ನಲ್ಲಿ ಪ್ರಸಾರ
3. ವಿದ್ಯುತ್ ಬಳಕೆಯಲ್ಲಿ ಉಳಿತಾಯದ ಕ್ರಮಗಳು, ಎಲ್.ಇ.ಡಿ. ಬಳಕೆಯ ಪ್ರಯೋಜನಗಳು, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದು, ಸೌರಶಕ್ತಿ ಬಳಸುವ ಬಗ್ಗೆ ಜಾಗೃತಿ, ಸಹಾಯವಾಣಿ ಸಂಖ್ಯೆ 1912 ಬಗ್ಗೆ, ಸುರಕ್ಷತೆಯ ಸಲಹೆಗಳು, ಜಾಗೃತಿಯನ್ನು ದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದರ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಆರ್ಥಿಕ ವರ್ಷ 2021-22ರ ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಮ್) ಶಾಖೆಯ ಜಾಗೃತಿ ಕಾರ್ಯಕ್ರಮಗಳು:
1. ಹೆಸ್ಕಾಂನ ಎಲ್ಲ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ ರೀಂಗ್ ಬ್ಯಾಕ್ ಟೋನ್: ಹೆಸ್ಕಾಂನ ಎಲ್ಲಾ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ, ಹೆಸ್ಕಾಂನ ಸೇವಾ ಸೌಲಭ್ಯಗಳು, ಬಿಇಇ ಪ್ರಮಾಣೀಕರಿಸಿದ 5-ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು. ಹೆಸ್ಕಾಂ 24ಗಂಟೆ ಸಹಾಯವಾಣಿ 1912, ಎಲ್.ಇ.ಡಿ ದೀಪಗಳ ಪ್ರಯೋಜನೆಗಳ ಬಗ್ಗೆ ಒಳಗೊಂಡ ರೀಂಗ್ ಬ್ಯಾಕ್ ಟೋನ್ನ್ನು ಎಲ್ಲಾ ಸಿ.ಯು.ಜಿ ಮೊಬೈಲ್ ಸಂಖ್ಯೆಗಳಿಗೆ ಒದಗಿಸಲಾಗಿದೆ.
2. ಆಲ್ ಇಂಡಿಯಾ ರೇಡಿಯೋ: ಇಂಧನ ಉಳಿತಾಯ, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದರ ಪ್ರಯೋಜನಗಳು, ಎಲ್.ಇ.ಡಿ. ದೀಪ ಬಳಕೆಯ ಪ್ರಯೋಜನಗಳು, ಸೋಲಾರ್ ಮೇಲ್ಛಾವಣಿ ಪಿವಿ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು, ರೈತರ ಕೃ ಷಿ ನೀರಾವರಿ ಪಂಪ್ ಸೆಟ್ ಗಳಿಗೆ ಬಿಇಇ ಪ್ರಮಾಣೀಕರಿಸಿದ 4 ಅಥವಾ 5 ಸ್ಟಾರ್ ರೇಟೆಡ್ ಪಂಪ್ ಅಳವಡಿಸುವುದು, ಸೌರಶಕ್ತಿ ಬಳಸುವ ಬಗ್ಗೆ ಜಾಗೃತಿ, ಡಿಎಸ್ಎಂ ಸಲಹೆಗಳು, ಸುರಕ್ಷತೆಯ ಸಲಹೆಗಳು, ಬಿಲ್ ಪಾವತಿ, ಕೃಷಿ ಬಳಕೆಗೆ ಸಲಹೆ, ಸಹಾಯ ವಾಣಿ ಸಂಖ್ಯೆ 1912, ಇತ್ಯಾದಿಗಳ ಕುರಿತು ಜಿಂಗಲ್ಸ್ ಪ್ರೈಮರಿ ಚಾನೆಲ್ನಲ್ಲಿ ಪ್ರಸಾರ
3. ವಿದ್ಯುತ್ ಬಳಕೆಯಲ್ಲಿ ಉಳಿತಾಯದ ಕ್ರಮಗಳು, ಎಲ್.ಇ.ಡಿ. ಬಳಕೆಯ ಪ್ರಯೋಜನಗಳು, ಇಂಧನ ದಕ್ಷತೆಯ ವಿಧಾನಗಳು- ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದು, ಸೌರಶಕ್ತಿ ಬಳಸುವ ಬಗ್ಗೆ ಜಾಗೃತಿ, ಸಹಾಯವಾಣಿ ಸಂಖ್ಯೆ 1912 ಬಗ್ಗೆ, ಸುರಕ್ಷತೆಯ ಸಲಹೆಗಳು, ಜಾಗೃತಿಯನ್ನು ದಿನ ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದರ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಸೌರ ಮೇಲ್ಛಾವಣಿ ಯೋಜನೆ:
ನವೀಕರಿಸಬಹುದಾದ ಇಂಧನವಾದ ಸೌರ ವಿದ್ಯುತ್ ಉತ್ಪಾದನೆಗೆ ಕರ್ನಾಟಕ ಸರ್ಕಾರದಿಂದ ಸೋಲಾರ್ ನೀತಿ 2014-21 ಅನ್ನು ದಿನಾಂಕ: 22.05.2014 ರಂದು ಜಾರಿಗೊಳಿಸಲಾಗಿರುತ್ತದೆ. ಸದರಿ ನೀತಿಯಲ್ಲಿ ಮೇಲ್ಛಾವಣಿ ಸೌರಶಕ್ತಿ ಯೋಜನೆಯಡಿಯಲ್ಲಿ ರಾಜ್ಯದಿಂದ 2022 ರೊಳಗೆ 2400 ಮೆ.ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯ ಗುರಿಯನ್ನು ನಿಗದಿ ಪಡಿಸಿದ್ದು, ಗೃಹಬಳಕೆ, ಕೈಗಾರಿಕಾ, ವಾಣಿಜ್ಯ ಮತ್ತು ಇತರೆ ಗ್ರಾಹಕರು ನೆಟ್ ಅಥವಾ ಗ್ರಾಸ್ ಮೀಟರಿಂಗ್ ವ್ಯವಸ್ಥೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಹುವಿಸಕಂಪನಿ ಸೌರ ಮೇಲ್ಛಾವಣಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಗ್ರಾಹಕರು ಸೋಲಾರ್ನಿಂದ ಉತ್ಪಾದಿಸಿರುವ ವಿದ್ಯುತ್ ಅನ್ನು ನೆಟ್ ಮೀಟರಿಂಗ್ ವ್ಯವಸ್ಥೆಯಲ್ಲಿ ಸ್ವಂತ ಬಳಕೆಯ ನಂತರ ಉಳಿದ ವಿದ್ಯುತ್ ಅನ್ನು ಹಾಗೂ ಗ್ರಾಸ್ ಮೀಟರಿಂಗ್ ವ್ಯವಸ್ಥೆಯಲ್ಲಿ ಉತ್ಪಾದಿಸಿರುವ ಸಂಪೂರ್ಣ ವಿದ್ಯುತ್ ಅನ್ನು ವಿದ್ಯುತ್ ವಿತರಣಾ ಕಂಪನಿಗಳಿಗೆ ಮಾನ್ಯ ಕೆ.ಇ.ಆರ್.ಸಿ ರವರು ನಿಗದಿಪಡಿಸಿರುವ ದರದಲ್ಲಿ ಮಾರಾಟ ಮಾಡಬಹುದಾಗಿದೆ.
ಸೌರ ಮೇಲ್ಛಾವಣಿ ಯೋಜನೆಯ ಪ್ರಗತಿ ಜನೆವರಿ-2023 ರವರೆಗೆ.
ವಿವರಗಳು |
ಸಂಖ್ಯೆ |
ಸಾಮರ್ಥ್ಯ (ಮೆ ವ್ಯಾ) |
ಗ್ರಾಹಕ ವರ್ಗ (Self Execution) |
1549 |
55.56 |
ಐ ಪಿ ಡಿ ಎಸ್ |
233 |
1.82 |
13 ನೇ ಹಣಕಾಸು ಆಯೋಗ |
340 |
2.88 |
ಒಟ್ಟು |
2122 |
60.27 |
ಸೌರ ಮೇಲ್ಛಾವಣಿ ಯೋಜನೆ ಹಂತ -2:
* ಎಮ್.ಎನ್.ಆರ್.ಇ. ಯಿಂದ ದಿನಾಂಕ 19.01.2022 ರಂದು ಹೆಸ್ಕಾಂ ಗೆ 10 ಮೆ.ವ್ಯಾ. ಆರ್ಥಿಕ ವರ್ಷ21-22 ಹಂಚಿಕೆಯಾಗಿದೆ.
* ಸಹಾಯಧನದ ಯೋಜನೆ – ವಸತಿ ಗ್ರಾಹಕರಿಗೆ (10 ಕಿ.ವ್ಯಾಟ್ ವರೆಗೆ ) ಮತ್ತು ಗುಂಪು ವಸತಿ ಸಮುದಾಯ (ಗು.ವ.ಸ)/ ವಸತಿಕಲ್ಯಾಣ ಸಂಘದ (ವ.ಕ.ಸ) ಗ್ರಾಹಕರುಗಳಿಗೆ (500 ಕಿ.ವ್ಯಾಟ್ ವರೆಗೆ -ಪ್ರತಿ ಮನೆಗೆ 10 ಕಿ.ವ್ಯಾ ರಂತೆ) ನೆಟ್ ಮೀಟರಿಂಗ್ ಆಧಾರದಲ್ಲಿ ಸೌರ ಮೇಲ್ಛಾವಣಿ ಸ್ಥಾಪಿಸಲು ಸಹಾಯಧನದ ಯೋಜನೆ.
* ವಸತಿ ಗ್ರಾಹಕರಿಗೆ 40% 3 ಕಿ.ವ್ಯಾಟ್ ವರೆಗೆ ಜೊತೆಗೆ 20% 3 ಕಿ.ವ್ಯಾಟ್ ಮೇಲ್ಪಟ್ಟು - 10 ಕಿ.ವ್ಯಾಟ್ ವರೆಗೆ
* ಗು.ವ.ಸ / ವ.ಕ.ಸ ಗ್ರಾಹಕರಿಗೆ 20% (ಪ್ರತಿ ಮನೆಗೆ 10 ಕಿ.ವ್ಯಾ ರಂತೆ ಒಟ್ಟು 500 ಕಿ.ವ್ಯಾ. ಗೆ ಮಾತ್ರ)
* ಟೆಂಡರ್ ಕರೆಯಲಾಗಿದೆ 5 ಏಜೆನ್ಸಿಗಳನ್ನು ಎಂಪನೆಲ್ ಮಾಡಲಾಗಿದೆ.
* ಅರ್ಜಿಗಳ ಆನ್ಲೈನ್ ನೋಂದಣಿಗಾಗಿ ಹೆಸ್ಕಾಂ ವೆಬ್ ಪೋರ್ಟಲ್ ನ್ನು ಪ್ರಾರಂಭಿಸಲಾಗಿದೆ.
* MNRE RTS ಹಂತ-II ರ ಹೊಸ ಕಾರ್ಯವಿಧಾನವನ್ನು ಬಿಡುಗಡೆ ಮಾಡಿದೆ.
* RTS ಹಂತ-II ಕಾರ್ಯವಿಧಾನದ ಸರಳೀಕರಣಕ್ಕಾಗಿ Dtd:30-07-2022 ರಂದು MNRE ಯಿಂದ ರಾಷ್ಟ್ರೀಯ ಪೋರ್ಟಲ್ ನ್ನು ಪ್ರಾರಂಭಿಸಲಾಗಿದೆ.
* ಕಾರ್ಯವಿಧಾನದ ಸರಳೀಕರಣದ ಅಡಿಯಲ್ಲಿ ಏಜೆನ್ಸಿಗಳನ್ನು ಎಂಪನೆಲ್ ಮಾಡಲು ಪೇಪರ್ ಅಧಿಸೂಚನೆಯನ್ನು ನೀಡಲಾಗಿದೆ (ಘೋಷಣೆಯ ಸ್ವರೂಪದೊಂದಿಗೆ ಅರ್ಜಿಯನ್ನು ಸಲ್ಲಿಸಲು ಮತ್ತು 5 ವರ್ಷಗಳವರೆಗೆ ಮಾನ್ಯವಾಗಿರುವ Rs2,50,00/- ಬಿಜಿಯನ್ನು ಠೇವಣಿ ಮಾಡಲು)
* ಪ್ರಸ್ತುತ 13 ಏಜೆನ್ಸಿಗಳನ್ನು ಹೊಸ ಕಾರ್ಯವಿಧಾನದ ಅಡಿಯಲ್ಲಿ ಎಂಪ್ಯಾನೆಲ್ ಮಾಡಲಾಗಿದೆ.
* ಇಲ್ಲಿಯವರೆಗೆ ಒಟ್ಟು 22 ಏಜೆನ್ಸಿಗಳು (5 ಟೆಂಡರ್ ನ ಮೂಲಕ +17 ನೇರ ಎಂಪನೆಲ್ಮೆಂಟ್ ಮೂಲಕ) ರಾಷ್ಟ್ರೀಯ ಪೋರ್ಟಲ್ನಲ್ಲಿ ನೋಂದಾಯಿಸಲಾಗಿದೆ.
* ಎರಡೂ ಪೋರ್ಟಲ್ಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಮತ್ತು ಅರ್ಜಿಯ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
ಪಿ ಎಮ್-ಕುಸುಮ್ ಯೋಜನೆ:
ಭಾರತ ಸರ್ಕಾರವು ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಂ ಉತ್ತನ್ ಮಹಾಭಿಯಾನ್ (ಪಿ ಎಮ್- ಕುಸುಮ್) ಯೋಜನೆಯನ್ನು ಆರಂಭಿಸಿದೆ.
* ಕಂಪೋನೆಂಟ್- ಎ: 10,000 MW ವಿಕೇಂದ್ರೀಕೃತ ಗ್ರೌಂಡ್/ಸ್ಟಿಲ್ಟ್ ಮೌಂಟೆಡ್ ಗ್ರಿಡ್ ಸಂಪರ್ಕಿತ ಸೌರ ಅಥವಾ ಇತರ ನವೀಕರಿಸಬಹುದಾದ ಇಂಧನ ಆಧಾರಿತ ವಿದ್ಯುತ್ ಸ್ಥಾವರಗಳನ್ನು 2 MW ವರೆಗೆ ಸ್ಥಾಪಿಸುವುದು.
> ಹೆಸ್ಕಾಂ ಹಂಚಿಕೆ- ಇರುವುದಿಲ್ಲಾ
* ಕಂಪೋನೆಂಟ್- ಬಿ: 7.5 HP ವರೆಗಿನ ವೈಯಕ್ತಿಕ ಸಾಮರ್ಥ್ಯದ 20 ಲಕ್ಷ ಸ್ವತಂತ್ರ ಸೌರಶಕ್ತಿ ಚಾಲಿತ ಕೃಷಿ ಪಂಪ್ಗಳ ಸ್ಥಾಪನೆ.
> ಕರ್ನಾಟಕದ ಹಂಚಿಕೆ : 10,000
> ಕೆ ಆರ್ ಇ ಡಿ ಎಲ್ ಈ ಯೋಜನೆಯ ಅನುಷ್ಠಾನ ಸಂಸ್ಥೆಯಾಗಿದೆ.
* ರಾಜ್ಯ ಸರ್ಕಾರವು, ಪಿ ಎಮ್- ಕುಸುಮ ಕಂಪೊನೆಂಟ್-ಬಿ ಅಡಿಯಲ್ಲಿ 7.5 ಹೆಚ್.ಪಿ ಸಾಮರ್ಥ್ಯದ ವರೆಗೆ ಸೌರ ಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ಸೆಟ್ ಗಳನ್ನು ಸ್ಥಾಪಿಸಲು ಎಂ.ಎನ್.ಆರ್.ಇ ಯಿಂದ ಕೇಂದ್ರ ಸಹಾಯಧನ ಶೇ. 30 ರಷ್ಟು, ರಾಜ್ಯ ಸರ್ಕಾರದಿಂದ ಶೇ. 50 ರಷ್ಟು ಹಾಗೂ ಪ.ಜಾ/ಪ.ಪಂ ಫಲಾನುಭವಿಗಳ ವಂತಿಗೆಯಾಗಿ ಶೇ.20 ರಷ್ಟು ಪಾಲು ಹಂಚಿಕೆಯಂತೆ, ಯೋಜನೆಯನ್ನು ಕೈಗೆತ್ತುಕೊಳ್ಳಲು ನಿರ್ದೇಶಿಸಿದೆ. (ರಾಜ್ಯದ ಪಾಲನ್ನು ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಮೊತ್ತದಿಂದ ಭರಿಸಲಾಗುತ್ತದೆ )
* ಒಟ್ಟು ಹೆಸ್ಕಾಂ ವ್ಯಾಪ್ತಿಯ 105 ಅರ್ಜಿಗಳನ್ನು ಸ್ವೀಕಾರವಾಗಿದ್ದು, ಅದರಲ್ಲಿ 105 ಸಂಖ್ಯೆಗಳ ಸೌರ ನೀರಾವರಿ ಪಂಪ್ಸೆಟ್ಗಳನ್ನು ಕಾರ್ಯಗತಗೊಳಿಸಲಾಗಿದೆ.
ಸ್ವೀಕೃತವಾದ ಅರ್ಜಿಗಳು |
ಕಾರ್ಯಗತಗೊಳಿಸಲಾದ ಸೌರ ನೀರಾವರಿ ಪಂಪ್ಸೆಟ್ಗಳು |
105 |
105 |
* ಆರ್ಥಿಕ ವರ್ಷ 21-22 ರ ಆನ್ಲೈನ್ ಅರ್ಜಿ ಸ್ವೀಕಾರವನ್ನು KREDL ನಿಂದ dtd: 15.07.2022 ರಿಂದ ಪ್ರಾರಂಭಿಸಲಾಗಿದೆ.
* ಈ ಯೋಜನೆಯಡಿಯಲ್ಲಿ 10 ಹೆಚ್. ಪಿ ಸಾಮರ್ಧ್ಯದವರೆಗೆ ಸೌರ ಪಂಪಸೆಟ್ ಅಳವಡಿಸಬಹುದಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಾಯಧನ 7.5 ಹೆಚ್. ಪಿ ಸಾಮರ್ಧ್ಯದ ಸೌರ ಪಂಪಸೆಟ್ ವರೆಗೆ ಲಭ್ಯವಿರುತ್ತದೆ.ಈ ಯೋಜನೆಗೆ ಸಾಮಾನ್ಯ, ಪ.ಜಾ ಹಾಗೂ ಪ.ಪಂ ವರ್ಗದ ಫಲಾನುಭವಿಗಳಾಗಬಹುದಾಗಿದ್ದು. ಪ್ರತಿ ಸೌರ ಚಾಲಿತ ಕೃಷಿ ಪಂಪಸೆಟ್ ಗೆ ಕೇಂದ್ರ, ರಾಜ್ಯ ಸರ್ಕಾರದಿಂದ ಒದಗಿಸಲಾಗುವ ಶೇ. ಸಹಾಯಧನ, ಹಾಗೂ ರೈತ ಫಲಾನುಭವಿಗಳು ಭರಿಸಬೇಕಾಗಿರುವ ಪಾಲಿನ ವಿವರಗಳು ಕೆಳಗಿನಂತಿವೆ:
ಎಂ. ಎನ್. ಆರ್. ಇ : ಶೇ. 30
ರಾಜ್ಯ ಸರ್ಕಾರ : ಶೇ. 30 ಸಾಮಾನ್ಯ ವರ್ಗಕ್ಕೆ,
ಶೇ. 50 ಪ.ಜಾ/ಪ.ಪಂ ವರ್ಗಕ್ಕೆ.
ರೈತ ಫಲಾನುಭವಿ ಪಾಲು : ಶೇ. 40 ಸಾಮಾನ್ಯ ವರ್ಗಕ್ಕೆ,
ಶೇ. 20 ಪ.ಜಾ/ಪ.ಪಂ ವರ್ಗಕ್ಕೆ
ಕಂಪೋನೆಂಟ್ –ಸಿ: 10 ಲಕ್ಷ ಗ್ರಿಡ್-ಸಂಪರ್ಕಿತ ಕೃಷಿ ಪಂಪ್ಗಳ (7.5 ಎಚ್ಪಿ ಪಂಪ್ ಸಾಮರ್ಥ್ಯದ ವರೆಗೆ) ಸೌರೀಕರಣ
ಹೆಸ್ಕಾಂ ಹಂಚಿಕೆ- ಇರುವುದಿಲ್ಲಾ
ಕಂಪೋನೆಂಟ್ – ಸಿ : ಪಿ ಎಮ್ ಕುಸುಮ Component-C
ಫೀಡರ್ಗಳ ಸೌರೀಕರಣ - ಈ ಯೋಜನೆಯ ಮೂಲ ಉದ್ದೇಶ ರೈತರ ಏಳಿಗೆಯಾಗಿದ್ದು, ಈ ಯೋಜನೆಯಿಂದ ಹಗಲಿನಲ್ಲಿ ನಿರಂತರವಾಗಿ ವಿದ್ಯುತನ್ನು ಪೂರೈಸಲು ಸಾದ್ಯವಾಗಬಹುದಾಗಿದೆ ಈ ಯೋಜನೆಯನ್ನು ಹೆಸ್ಕಾಂ ವ್ಯಾಪ್ತಿಯಲ್ಲಿ ಹಗಲಿನಲ್ಲಿ 7 ತಾಸು ನಿರಂತರ ವಿದ್ಯುತ್ ಪೂರೈಸಲಾಗದ ವಿತರಣಾ ಕೇಂದ್ರ ಹಾಗೂ ಫೀಡರ್ ಗಳಿಗೆ ಅನುಷ್ಠಾನಗೊಳಿಸಿದ್ದಲ್ಲಿ ಈಗಾಗುತ್ತಿರುವ ರೈತರ ಸಮಸ್ಯೆಗಳನ್ನು ತಪ್ಪಿಸಬಹುದಾಗಿರುತ್ತದೆ. ಈ ಯೋಜನೆಯಿಂದಾಗಿ ರೈತರ ಸಮಸ್ಯೆಗೆ ಪರಿಹಾರ ದೊರಕಿದಂತಾಗುತ್ತದೆ ಹಾಗೂ ರೈತರ ಪ್ರಗತಿ ನಿಶ್ಚಿತವಾಗಿರುತ್ತದೆ.
> ಎಮ್ ಎನ್ ಆರ್ ಇ ನಿಗದಿ ಪಡಿಸಿದ ಸೌರ ವಿದ್ಯುತ್ ಸ್ಥಾವರ ಸ್ಥಾಪನೆ ವೆಚ್ಚ -3.5 ಕೋಟಿ/ಮೆವ್ಯಾ
> ಕೇಂದ್ರ ಹಣಕಾಸು ನೆರವು 30% ಅಂದರೆ 1.05 ಕೋಟಿ/ಮೆವ್ಯಾ
> ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ - EN71VSC2021, ದಿನಾಂಕ: 04.03.202l ಕೆ ಆರ್ ಇ ಡಿ ಎಲ್ ಈ ಯೋಜನೆಯ ಅನುಷ್ಠಾನ ಸಂಸ್ಥೆಯಾಗಿದೆ.
> ಹೆಸ್ಕಾಂ ಹಂಚಿಕೆ - 65000 ನೀರಾವರಿ ಪಂಪ್ ಸೆಟ್ ಗಳ ಫೀಡರ್ ಸೌರಿಕರಣ.
* ಯೋಜನೆಯನ್ನು ಅನುಷ್ಠಾನಗೊಳಿಸಲು (ಫೀಡರ್ಗಳ ಸರಾಸರಿ ಬಳಕೆಯ ಆಧಾರದ ಮೇಲೆ) 65,000 ಐ ಪಿ ಸೆಟ್ಗಳಿಗೆ ಫೀಡರ್ಗಳನ್ನು ಗುರುತಿಸಲಾಗಿದೆ, ವಿವರಗಳನ್ನು KREDL ಗೆ ಸಲ್ಲಿಸಲಾಗಿದೆ.
* ದಿನಾಂಕ:20.06.2022 ರಂದು ಗೌರವಾನ್ವಿತ KERC ಸಿಲಿಂಗ್ ಸುಂಕಕ್ಕೆ ಸಂಬಂಧಿಸಿದಂತೆ, ಬೆಂಚ್ ಮಾರ್ಕ್ ಸುಂಕವನ್ನು ರೂ 2.32 ಪ್ರತಿ ಯುನಿಟ್ ಗೆ ನಿಗದಿ ಪಡಿಸಿದೆ.
* KREDL ನಿಂದ ಫೀಡರ್ ಸೌರೀಕರಣಕ್ಕಾಗಿ ಟೆಂಡರ್ ಕಾರ್ಯ ಪ್ರಕ್ರಿಯೆಯಲ್ಲಿದೆ.
ವಿದ್ಯುತ ವಾಹನ ಚಾರ್ಜಿಂಗ್ ಕೇಂದ್ರಗಳು:
- ದಿನಾಂಕ 14.12.2018 ರಂದು ವಿದ್ಯುತ ವಾಹನ ಚಾರ್ಜಿಂಗ್ ಕೇಂದ್ರಗಳ ಕುರಿತಾಗಿ ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿರುತ್ತದೆ.
- ಕರ್ನಾಟಕ ಸರ್ಕಾರದ ದಿ:28.12.2018 ರ ಪತ್ರದನ್ವಯ ಬೆಸ್ಕಾಂ ನ್ನು ರಾಜ್ಯದಲ್ಲಿ ವಿದ್ಯುತ ವಾಹನ ಚಾರ್ಜಿಂಗ್ ಕೇಂದ್ರಗಳ ಮೂಲ ಸೌಕರ್ಯಗಳನ್ನು ಸ್ಥಾಪಿಸಲು ನೋಡಲ್ ಏಜೇನ್ಸಿಯನ್ನಾಗಿ ನೇಮಿಸಿದೆ.
- ದಿನಾಂಕ 01.10.2019 ರಂದು ಪರಿಷ್ಕೃತ ಮಾರ್ಗಸೂಚಿಗಳನ್ನು GOI ಹೊರಡಿಸಿದೆ.
- ಸದರಿ ಆರ್ಥೀಕ ವರ್ಷದಲ್ಲಿ ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರಿ ಸ್ಥಳಗಳನ್ನು ಮಾತ್ರ ಗುರುತಿಸಲು ಬೆಸ್ಕಾಂ ವಿನಂತಿಸಿದೆ.
- ಹೆಸ್ಕಾಂ ವ್ಯಾಪ್ತಿಯಲ್ಲಿ 64 ಹೆಸ್ಕಾಂ ಕಛೇರಿಗಳು ಸೇರಿದಂತೆ ಒಟ್ಟು 274 ಸರಕಾರಿ ಸ್ಥಳಗಳನ್ನು ಗುರುತಿಸಲಾಗಿದೆ. ವಿವರಗಳನ್ನು ಬೆಸ್ಕಾಂ (ನೋಡಲ್ ಏಜೆನ್ಸಿ) ಗೆ ಸಲ್ಲಿಸಲಾಗಿದೆ.
ಜಿಲ್ಲಾವಾರು ಪ್ರಸ್ತಾಪಿಸಲಾದ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರಗಳ ವಿವರ |
ಕ್ರ.ಸಂ |
ಜಿಲ್ಲೆ |
ಪ್ರಸ್ತಾಪಿಸಲಾದ ಒಟ್ಟು ಚಾರ್ಜಿಂಗ್ ಕೇಂದ್ರಗಳ ಸಂಖ್ಯೆ |
ಹೆದ್ದಾರಿಗಳಲ್ಲಿ ಪ್ರಸ್ತಾಪಿಸಲಾದ ಚಾರ್ಜಿಂಗ್ ಕೇಂದ್ರಗಳ ಸಂಖ್ಯೆ |
1 |
ಧಾರವಾಡ |
53 |
33 |
2 |
ಗದಗ |
10 |
7 |
3 |
ಹಾವೇರಿ |
32 |
23 |
4 |
ಉತ್ತರಕನ್ನಡ |
28 |
23 |
5 |
ಬೆಳಗಾವಿ |
54 |
13 |
6 |
ಬಾಗಲಕೋಟೆ |
63 |
7 |
7 |
ವಿಜಯಪುರ |
34 |
22 |
|
ಒಟ್ಟು |
274 |
128 |
- ಹೆಸ್ಕಾಂ ನ ಕಛೇರಿ ಆವರಣದಲ್ಲಿ ಅತ್ಯಂತ ಶೀಘ್ರದಲ್ಲಿ 3.3KW AC001 Charger ಅನ್ನು ಸ್ಥಾಪಿಸಲು ಬೆಸ್ಕಾಂ ಕೋರಿರುವ ಪ್ರಯುಕ್ತ 12 ಹೆಸ್ಕಾಂ ಕಛೇರಿ ಆವರಣದಲ್ಲಿ EV Charger ಗಳನ್ನು ಸ್ಥಾಪಿಸಲು ದಿನಾಂಕ:22.06.2022 ರಂದು (Quotation Based) enquiry ಹೆಸ್ಕಾಂ ಕರೆದಿದೆ.
- 12 ಹೆಸ್ಕಾಂ ಕಛೇರಿ ಆವರಣದಲ್ಲಿ 3.3KW AC001 Charger ಗಳನ್ನು ಸ್ಥಾಪಿಸಲು ಒಪ್ಪಂದದ ಆದೇಶ ನೀಡಲಾಗಿದೆ. ಒಪ್ಪಂದದ ಆದೇಶ ಸಂಖ್ಯೆ:HESCOM/SEE(PMC)/EEP3/AEE-1/EV/2022-23/CYS-2258 ದಿನಾಂಕ:28.06.2022. 12 ಚಾರ್ಜಿಂಗ್ ಸ್ಟೆಷನ ಸ್ಥಾಪಿಸಲಾಗಿದೆ.
- ಚಾರ್ಜರ್ ಗಳನ್ನೂ ಈ ಕೆಳಗಿನ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ: 1) ಕಾರ್ಪೊರೇಟ್ ಕಚೇರಿ, ನವನಗರ ಹುಬ್ಬಳ್ಳಿ 2) O&M ನಗರ ಉಪವಿಭಾಗ-3, ಹುಬ್ಬಳ್ಳಿ 3) ವಲಯ ಕಛೇರಿ, ಹುಬ್ಬಳ್ಳಿ 4) O&M ವಿಭಾಗ ಕಛೇರಿ, ವಿದ್ಯಾಗಿರಿ, ಧಾರವಾಡ 5) CSD-1 & CSD-2 ಉಪವಿಭಾಗ, ಬೆಳಗಾವಿ 6) ವಲಯ ಕಛೇರಿ, ಬೆಳಗಾವಿ 7) O&M ವಿಭಾಗ ಕಛೇರಿ ಹಾವೇರಿ 8) O&M ವಿಭಾಗ ಕಛೇರಿ, ಕಾರವಾರ 9)O&M ಸರ್ಕಲ್ ಕಛೇರಿ, ಬಾಗಲಕೋಟ 10) O&M ಸರ್ಕಲ್ ಕಛೇರಿ, ವಿಜಯಪುರ 11) O&M ವಿಭಾಗ ಕಛೇರಿ, ಗದಗ 12) O&M ವಿಭಾಗ ಕಛೇರಿ, ಚಿಕ್ಕೋಡಿ.
- ಸ್ಥಾಪಿತ 3.3KW AC001 Charger ಗಳ ಛಾಯಾ ಚಿತ್ರ.

ಇತರೆ ಮಾಹಿತಿಗಳು :
ಕ್ರಮ ಸಂಖ್ಯೆ
|
ವಿವರಗಳು
|
|
ಗಾತ್ರ
|
ವೀಕ್ಷಿಸಿ/ಡೌನಲೋಡ್
|
01 |
ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಂ) ಜಾಗೃತಿ ಕರಪತ್ರ. |
3415 ಕೆಬಿ |
 |
02 |
ಪತ್ರಿಕೆಗಳ ಮೂಲಕ ಡಿಮ್ಯಾಂಡ್ ಸೈಡ್ ಮ್ಯಾನೇಜ್ಮೆಂಟ್ (ಡಿಎಸ್ಎಂ) ಜಾಗೃತಿ ಜಾಹೀರಾತಿನ ಮಾದರಿಗಳು. |
24769 ಕೆಬಿ |
 |
03 |
ಡಿ ಎಸ್ ಎಮ್ ಜಾಗೃತಿ ಕಾರ್ಯಕ್ರಮಗಳ ಚಿತ್ರ ಭಂಡಾರ |
- |
 |
04 |
ಡಿ ಎಸ್ ಎಮ್ ಕಾರ್ಯಕ್ರಮದಡಿಯಲ್ಲಿ ಇಂಧನ ಉಳಿತಾಯ, ಸುರಕ್ಷತೆ, ಹೆಸ್ಕಾಂ ಸೇವೆ, ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸುವ ಜಿಂಗಲ್ಸ್, ಆಕಾಶವಾಣಿ ಧಾರವಾಡ ಪ್ರೈಮರಿ ಚಾನಲ್ ನಲ್ಲಿ ಪ್ರಸಾರ. |
1. ಬಿಇಇ 5 ಸ್ಟಾರ್ ರೇಟೆಡ್ ಉಪಕರಣಗಳನ್ನು ಬಳಸುವುದು |
587 ಕೆಬಿ |
 |
2. ಎಲ್ಇಡಿ ಬಲ್ಬ್ ಗಳನ್ನು ಬಳಸುವ ಕುರಿತು ಜಾಗೃತಿ |
451 ಕೆಬಿ |
 |
3. ಐಎಸ್ಐ ಉಪಕರಣಗಳನ್ನು ಬಳಸುವುದು |
536 ಕೆಬಿ |
 |
4. ನೈಸರ್ಗಿಕ ಬೆಳಕನ್ನು ಬಳಸಿಕೊಂಡು ವಿದ್ಯುತ್ ಉಳಿತಾಯದ ಸಲಹೆ |
377 ಕೆಬಿ |
 |
5. ರೆಫ್ರಿಜರೇಟರ್ ಬಳಕೆಯಲ್ಲಿ ವಿದ್ಯುತ್ ಉಳಿತಾಯದ ಸಲಹೆ |
569 ಕೆಬಿ |
 |
6. ವಿದ್ಯುತ್ ಉಳಿತಾಯದ ಸಲಹೆಗಳು |
466 ಕೆಬಿ |
 |
7. ಸುರಕ್ಷತೆಯ ಅರಿವು 1 |
494 ಕೆಬಿ |
 |
8. ಸುರಕ್ಷತೆಯ ಅರಿವು 2 |
464 ಕೆಬಿ |
 |
9. ಸುರಕ್ಷತೆಯ ಅರಿವು 3 |
547 ಕೆಬಿ |
 |
10. ಆನ್ಲೈನ್ ಪಾವತಿ |
643 ಕೆಬಿ |
 |